ದಾಂಡೇಲಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು 16 ಬಾರಿ ಬಜೆಟ್ ಮಂಡಿಸಿ ದಾಖಲೆಯನ್ನು ಮಾಡುವುದರ ಜೊತೆಗೆ ಈ ಬಾರಿ ಬಜೆಟನ್ನು ಜನಪರವಾದ ಯೋಜನೆ ಹಾಗೂ ಸಂಗತಿಗಳನ್ನು ಇಟ್ಟುಕೊಂಡು ಮಂಡಿಸಿದ್ದಾರೆ. ಬಜೆಟ್ ನಲ್ಲಿ ಬುಡಕಟ್ಟುಗಳ ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆಗೆ ಉತ್ತೇಜನ ನೀಡಲಾಗಿದೆ. ವಿಶೇಷವಾಗಿ ಜೋಯಿಡಾದ ಸಾವಯವ ಕೃಷಿಗೆ, ಹಳಿಯಾಳದ ನೀರಾವರಿಗೆ ಯೋಜನೆ ನೀಡಲಾಗಿದೆ. ಈ ಬಜೆಟ್ ನಲ್ಲಿ ರಾಜ್ಯದ ಸರ್ವ ಜನತೆಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಾಗಿದ್ದು, ಇದು ಅಭಿವೃದ್ಧಿ ಪರ ಬಜೆಟ್ ಆಗಿದೆ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಕೆ. ಹಲವಾಯಿ ಅವರು ರಾಜ್ಯ ಸರ್ಕಾರದ ಈ ಬಾರಿಯ ಬಜೆಟನ್ನು ಬಣ್ಣಿಸಿದ್ದಾರೆ.
ಜನಪರ ಕಾಳಜಿಯ ಬಜೆಟ್ : ಮೋಹನ ಹಲವಾಯಿ
